September 20, 2024

ಏಪ್ರಿಲ್ 1 ನೇ ತಾರೀಖಿನ ಭಾನುವಾರ ಕಾಸರಗೋಡು ಕುಂಬ್ಳೆ ನಾಯ್ಕಾಪುವಿನಲ್ಲಿ ಶ್ರೀ ಗೋಪಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಪ್ರೇಮಾ ಗೋಪಾಲಕೃಷ್ಣ ಭಂಡಾರಿ ದಂಪತಿಗಳು ತಮ್ಮ ವೈವಾಹಿಕ ಜೀವನದ ಇಪ್ಪತ್ತೈದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.


ಭಾರತೀಯ ಸೇನೆಯ ಮಾಜಿ ಯೋದ ಕುಂಬ್ಳೆಯ ದಿವಂಗತ ಈಶ್ವರ ಭಂಡಾರಿ ಮತ್ತು ಮೋಹಿನಿ ಈಶ್ವರ ಭಂಡಾರಿಯವರ ಮಗನಾದ ಶ್ರೀ ಗೋಪಾಲಕೃಷ್ಣ ಭಂಡಾರಿಯವರು, ಮಂಚಿ ಕೋಕಾಳದ ದಿವಂಗತ ಸಂಕಪ್ಪ ಭಂಡಾರಿ ಮತ್ತು ದಿವಂಗತ ರತ್ನಾ ಸಂಕಪ್ಪ ಭಂಡಾರಿ ದಂಪತಿಗಳ ಪುತ್ರಿ ಶ್ರೀಮತಿ ಪ್ರೇಮಾ ಗೋಪಾಲಕೃಷ್ಣ ಭಂಡಾರಿ ದಂಪತಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಇಪ್ಪತ್ತೈದು ವಸಂತಗಳನ್ನು ಪೂರೈಸಿದ ಈ ಶುಭ ಸಂದರ್ಭದಲ್ಲಿ ಅವರ ಮಕ್ಕಳಾದ ಶ್ರೀ ಯೋಗಿತ್ ಭಂಡಾರಿ, ಶ್ರೀ ಶರತ್ ಭಂಡಾರಿ, ಶ್ರೀ ಚರಣ್ ಭಂಡಾರಿ, ಕುಂಬ್ಳೆ ನಾಯ್ಕಾಪು ಭಂಡಾರಿ ಕುಟುಂಬಸ್ಥರು, ಮಂಚಿ ಕೋಕಾಳ ಭಂಡಾರಿ ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರು ಶುಭ ಹಾರೈಸಿದರು.


ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

                       

-ಭಂಡಾರಿವಾರ್ತೆ

Leave a Reply

Your email address will not be published. Required fields are marked *