September 20, 2024

 ತಿರುಪತಿ ತಿರುಮಲ ದೇವಸ್ಥಾನದ ದೇವರ ದರ್ಶನ ಮಾಡಿ ಮರಳಿ ಬರುವಾಗ ಬೆಂಗಳೂರಿನ ಗುಡ್ಡೇಮಾರನಹಳ್ಳಿ ಎಂಬಲ್ಲಿ ಜನವರಿ 8 ರ ಬುಧವಾರದಂದು ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮಂಜೇಶ್ವರ ಬೆಜ್ಜದ ಶ್ರೀ ಕಿಶನ್ ಭಂಡಾರಿ ಸಹಿತ ಮೂರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ತಕ್ಷಣವೇ ಇವರೆಲ್ಲರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳೀಯರ ಸಹಕಾರದಿಂದ ಕೊಂಡೊಯ್ಯಲಾಯಿತು ಆದರೆ ಆಗಲೇ ಕಿಶನ್ ಭಂಡಾರಿ ಬೆಜ್ಜ ಸಹಿತ ಮೂರು ಮಂದಿ ನಿಧನರಾಗಿದ್ದರು.

 

 


ಶ್ರೀ ಕಿಶನ್ ಭಂಡಾರಿ ಬೆಜ್ಜ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದು ಪತ್ನಿ ಚಿಗುರು ಶಾಲೆಯ ಶಿಕ್ಷಕಿ ಶ್ರೀಮತಿ ಸುಶ್ಮಿತಾ ಕಿಶನ್ ಮತ್ತು ತಂದೆ ಶ್ರೀ ವಸಂತ ಭಂಡಾರಿ ತಾಯಿ ಶ್ರೀಮತಿ ಸುಧಾ ವಸಂತ ಭಂಡಾರಿ ಸಹೋದರ ಕಿರಣ್ ಭಂಡಾರಿ ಸಹೋದರಿ ಕೀರ್ತಿ ಹಾಗೂ ಬಂದು ಬಳಗವನ್ನು ಅಗಲಿದ್ದಾರೆ.


ಕಿಶನ್ ಭಂಡಾರಿ ಯವರ ಅಕಾಲಿಕ ಮರಣಕ್ಕೆ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ತೀವ್ರ ಸಂತಾಪ ವ್ಯಕ್ತಪಡಿಸಿ ಭಗವಂತನು ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಸಹಿಸವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತದೆ.

-ಭಂಡಾರಿ ವಾತೆ೯

 

Leave a Reply

Your email address will not be published. Required fields are marked *