September 20, 2024

2017 -18 ರ ಸಾಲಿನ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕಾರ್ಕಳ ಕಾಬೆಟ್ಟುವಿನ ಸಾಗರ್ ಇವರು 554 (ಶೇ. 92.33) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನಿಟ್ಟೆ ಅಡ್ಯಂತಾಯ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರು ಕಾರ್ಕಳ , ಕಾಬೆಟ್ಟು ಶ್ರೀಯುತ ಉದಯ ಆರ್ .ಕೆ ಮತ್ತು ಶ್ರೀಮತಿ ಹೇಮಾವತಿ ದಂಪತಿಗಳ ಸುಪುತ್ರ. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

 

ಈ ಶುಭ ಸಂದರ್ಭದಲ್ಲಿ ತಂದೆ -ತಾಯಿ , ಗುರು ಹಿರಿಯರು ,ಸ್ನೇಹಿತರು ಮತ್ತು ಬಂಧುಗಳೆಲ್ಲರೂ ಸಾಗರ್ ರವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

 

Advt.

ಭಂಡಾರಿ ಕುಟುಂಬ ದ ಪ್ರತಿಭೆ ಸಾಗರ್ ಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ

ಭಂಡಾರಿ ವಾರ್ತೆ ಬೇಡುತ್ತದೆ.

–ಭಂಡಾರಿ ವಾರ್ತೆ

Leave a Reply

Your email address will not be published. Required fields are marked *