September 20, 2024

2017 -18 ರ ಸಾಲಿನ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕಾರ್ಕಳ ಜೋಡುರಸ್ತೆಯ ಸುಕೇಶ್ ಕೆ ಭಂಡಾರಿ ಇವರು 589 (ಶೇ. 98.17) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾರ್ಕಳ ಜ್ಞಾನಸುಧಾ ಪಿ ಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರು ಕಾರ್ಕಳ ಜೋಡುರಸ್ತೆಯ ಶ್ರೀಯುತ ಕೃಷ್ಣ ಎಸ್ ಭಂಡಾರಿಯವರ ಸುಪುತ್ರ .

ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕಾರ್ಕಳ ಜ್ಞಾನ ಸುಧಾ ಪದವಿ ಪೂರ್ವ ಕಾಲೇಜಿನಲ್ಲಿ 1st Rank ಪಡೆದು ಕಾಲೇಜಿನ ಅತಿ ಹೆಚ್ಚು ಅಂಕ ಪಡೆದವರಲ್ಲಿ ಸುಕೇಶ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಈ ಶುಭ ಸಂದರ್ಭದಲ್ಲಿ ತಂದೆ- ತಾಯಿ, ಗುರು ಹಿರಿಯರು, ಸ್ನೇಹಿತರು ಬಂಧುಗಳೆಲ್ಲರೂ ಸುಕೇಶ್ ಕೆ ಭಂಡಾರಿ ರವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

Advt.

ಭಂಡಾರಿ ಕುಟುಂಬ ದ ಪ್ರತಿಭೆ ಸುಕೇಶ್ ಕೆ ಭಂಡಾರಿ ಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ

ಭಂಡಾರಿ ವಾರ್ತೆ ಬೇಡುತ್ತದೆ.

 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *