September 19, 2024

ಕುಂದಾಪುರ ಬೀಜಾಡಿಯ ಶ್ರೀ ಗಣೇಶ್ ಭಂಡಾರಿ ಮತ್ತು ಶ್ರೀಮತಿ ಪ್ರೇಮಾ ಗಣೇಶ್ ಭಂಡಾರಿ ದಂಪತಿಯ ಪ್ರಥಮ ಪುತ್ರ…

ಚಿ|| ವಸಂತ್ ಭಂಡಾರಿ.
ಯವರ

ವಿವಾಹವು ಹೊಸನಗರ ತಾಲೂಕಿನ ಕೆರೆಹಳ್ಳಿ ಬೇಳೂರು ಗ್ರಾಮದ ಶ್ರೀ ಗಣೇಶ್ ಭಂಡಾರಿ ಮತ್ತು ಶ್ರೀಮತಿ ನಾಗರತ್ನ ಗಣೇಶ್ ಭಂಡಾರಿ ದಂಪತಿಯ ದ್ವಿತೀಯ ಪುತ್ರಿ…

ಚಿ||ಸೌ|| ಸುಚಿತ್ರಾ.

 

ಕುಂದಾಪುರ ಬೀಜಾಡಿಯ ಶ್ರೀ ಗಣೇಶ್ ಭಂಡಾರಿ ಮತ್ತು ಶ್ರೀಮತಿ ಪ್ರೇಮಾ ಗಣೇಶ್ ಭಂಡಾರಿ ದಂಪತಿಯ ತೃತೀಯ ಪುತ್ರ…

ಚಿ|| ಹರೀಶ್ ಭಂಡಾರಿ.
ಯವರ ವಿವಾಹವು ಸಾಗರದ ಚಿಪ್ಲಿಯ ಶ್ರೀ ಚಂದ್ರಶೇಖರ ಭಂಡಾರಿ ಮತ್ತು ಶ್ರೀಮತಿ ಜಯಂತಿ ಚಂದ್ರಶೇಖರ ಭಂಡಾರಿ ದಂಪತಿಯ ತೃತೀಯ ಪುತ್ರಿ…
ಚಿ||ಸೌ|| ಸಂಗೀತಾ.

 


ರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ “ಮಂಜುಕೃಪಾ” ದಲ್ಲಿ ಮೇ 11 ರ ಶುಕ್ರವಾರ ನೆರವೇರಿತು.

ಮದುವೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಧು ಬಾಂಧವರು, ಗುರು ಹಿರಿಯರು,ಕುಟುಂಬಸ್ಥರು, ಸ್ನೇಹಿತರು ನವ ವಧುವರರಿಗೆ ಶುಭ ಹಾರೈಸಿದರು.
ವಿಶೇಷವಾಗಿ ಶ್ರೀ ಸಾತ್ವಿಕ್ ಭಂಡಾರಿ, ಶ್ರೀ ಸುನಿಲ್ ಭಂಡಾರಿ, ಶ್ರೀ ಸುದೇಶ್ ಭಂಡಾರಿ ಮತ್ತು ಶ್ರೀ ಸುಧೀರ್ ಭಂಡಾರಿ ನವ ದಂಪತಿಗಳಿಗೆ ಶುಭ ಕೋರಿದರು.


ಶ್ರೀ ದೇವರ ದಿವ್ಯ ಸಾನ್ನಿಧ್ಯದಲ್ಲಿ ವಿವಾಹ ಬಂಧನಕ್ಕೊಳಗಾದ ನವ ಜೋಡಿಗಳಿಗೆ ಭಗವಂತನು ಅವರ ಸಕಲ ಇಷ್ಠಾರ್ಥಗಳನ್ನೂ ನೆರವೇರಿಸಿ,ಸುಖ ಶಾಂತಿ ನೆಮ್ಮದಿಯುತ ಬಾಳು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

 

-ಭಂಡಾರಿವಾರ್ತೆ

Leave a Reply

Your email address will not be published. Required fields are marked *