September 20, 2024
ಸಿದ್ದಾಪುರ ಕಡ್ರಿ ಶಿವರಾಮ ಭಂಡಾರಿ ಮತ್ತು ಶ್ರೀಮತಿ ಸುಮನ ಶಿವರಾಮ ಭಂಡಾರಿ ದಂಪತಿಯ ಪುತ್ರಿ ಹಾಗೂ ಹಿಲಿಯಣ ಮಹಾಬಲ ಭಂಡಾರಿಯವರ ಪೌತ್ರಿ ವ.ಸಂತೋಷ ಭಂಡಾರಿಯವರ ಸೊಸೆ…

ಚಿ|| ಸೌ|| ಸುಶ್ಮಿತಾ.

ಮತ್ತು

ಚಿ|| ವಿಘ್ನೇಶ್.

ಕಟೀಲು ಶ್ರೀ ಕರುಣಾಕರ ಭಂಡಾರಿಯವರ ದ್ವಿತೀಯ ಪುತ್ರ, ವ. ದಿ.ಕರಿಂಕ ನಾರಾಯಣ ಭಂಡಾರಿ ಹಾಗೂ ಕಟೀಲು ದಿ. ದಾಸು ಭಂಡಾರಿಯವರ ಪೌತ್ರ ವ. ಕಟೀಲು ಶ್ರೀ ಸುಂದರ ಭಂಡಾರಿ ಹಾಗೂ ಅಲಂಗಾರ ಉಳಿಯ ಶ್ರೀ ಮಂಜುನಾಥ ಭಂಡಾರಿಯವರ ಅಳಿಯ.
ಇವರ ವಿವಾಹವು ಡಿಸೆಂಬರ್ 31,2018 ರ ಸೋಮವಾರ ಗುರುದೇವತಾನುಗ್ರಹದಿಂದ  “ಹೆಬ್ರಿ ಶ್ರೀ ಅನಂತಪದ್ಮನಾಭ ಸನ್ನಿಧಿಯ ಸಭಾಭವನ” ದಲ್ಲಿ ವಿಜೃಂಭಣೆಯಿಂದ ನೆರವೇರಿತು.
ವಿವಾಹ ಸಂಭ್ರಮದಲ್ಲಿ ಗುರುಹಿರಿಯರು ಬಂಧುಗಳು ಸ್ನೇಹಿತರು ಉಪಸ್ಥಿತರಿದ್ದು ನವದಂಪತಿಗಳಿಗೆ ಶುಭ ಹಾರೈಸಿದರು.
ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಸುಷ್ಮಿತಾ ಮತ್ತು ವಿಘ್ನೇಶ್ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ಕರುಣಿಸಿ, ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ : ವೆಂಕಟೇಶ್ ಭಂಡಾರಿ ಕುಂದಾಪುರ.

Leave a Reply

Your email address will not be published. Required fields are marked *