September 20, 2024

ಮಂಗಳೂರು ತಾಲೂಕು ಕಿನ್ನಿಗೋಳಿಯ ತಾಳಿಪಾಡಿ ಶ್ರೀ ಮೋಹನ ಭಂಡಾರಿ ಮತ್ತು ಶ್ರೀಮತಿ ವಿಟ್ಟು ಭಂಡಾರಿ ದಂಪತಿಯ ಪುತ್ರ ಶ್ರೀ ಟಿ.ಎಮ್.ಶೇಖರ್ ಭಂಡಾರಿ ಜುಲೈ 24 ನೇ ಶುಕ್ರವಾರದಂದು ಸಾಯಂಕಾಲ ನಾಲ್ಕು ಗಂಟೆಗೆ ಮುಂಬಯಿ ಮುಲುಂಡು ನಲ್ಲಿ ನಿಧನರಾದರು. ಇವರು ಮುಂಬಯಿ ಭಂಡಾರಿ ಸೇವಾ ಸಮಿತಿಯ ಹಿರಿಯ ಸದಸ್ಯರಾಗಿದ್ದರು ಹಾಗೂ ಸಂಘದ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

 

ಶ್ರೀ ಟಿ.ಎಮ್ .ಶೇಖರ್ ಭಂಡಾರಿ ಯವರು ಪತ್ನಿ ಶ್ರೀಮತಿ ಶುಭ ಶೇಖರ್ ಭಂಡಾರಿ ಪುತ್ರಿ ಪ್ರಜಾಕ್ತ ಪುತ್ರ ಅಮಿತ್ ಹಾಗೂ ಬಂದು ಬಳಗವನ್ನು ಅಗಲಿದ್ದಾರೆ .
ಇವರ ಪತ್ನಿ ಪುತ್ರಿ ಪುತ್ರ ಮತ್ತು ಕುಟುಂಬಸ್ಥರಿಗೆ ಅಗಲುವಿಕೆಯ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ .

Leave a Reply

Your email address will not be published. Required fields are marked *