September 20, 2024

 ದಿವಂಗತ ಅಜೆಕಾರು ವಿಠ್ಠಲ ಭಂಡಾರಿಯವರ ಧರ್ಮಪತ್ನಿ ಕೆ.ಲಕ್ಷ್ಮೀ (ಗಂಗಮ್ಮ) ವಿಠ್ಠಲ ಭಂಡಾರಿಯವರು ಜುಲೈ 9 ರ ಸೋಮವಾರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ರಾಜೀವ ಗಾಂಧಿ ಆಶ್ರಯ ಭಡಾವಣೆಯ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

       ಮೃತರು ಮುಂಬಯಿಯ ಮೀರಾರೋಡ್ ನಲ್ಲಿರುವ ಪುತ್ರ ಶ್ರೀ ರಮೇಶ್ ಭಂಡಾರಿ, ಪುತ್ರಿಯರಾದ ಶ್ರೀಮತಿ ಶಾಂತ ಶ್ರೀನಿವಾಸ್ ಭಂಡಾರಿ.ಕೊಪ್ಪ, ಶ್ರೀಮತಿ ವಿಜಯ ಸುಂದರ ಭಂಡಾರಿ ಕೊಪ್ಪ, ಶ್ರೀಮತಿ ಶೋಭಾ ಅಶೋಕ್ ಭಂಡಾರಿ. ಚಿಕ್ಕಮಗಳೂರು, ಶ್ರೀಮತಿ ಸುಮತಿ ದಾಸು ಭಂಡಾರಿ. ಘಾಟ್ ಕೋಪರ್. ಮುಂಬಯಿ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಅಪಾರ ಸಂಖ್ಯೆಯ ಬಂಧುಬಳಗದವರನ್ನು ಅಗಲಿದ್ದಾರೆ.

       ಮೃತರ ವೈಕುಂಠ ಸಮಾರಾಧನೆಯು ಜುಲೈ 22 ರ ಭಾನುವಾರ ಕೊಪ್ಪದ ಇಂದಿರಾನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮದ್ಯಾಹ್ನ 12 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

       ಕುಟುಂಬಸ್ಥರಿಗೆ ಮತ್ತು ಬಂಧುಬಳಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ.ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.

     

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *