September 20, 2024
ಸೆಪ್ಟೆಂಬರ್ 23 ರ ಭಾನುವಾರ ಬೆಳ್ತಂಗಡಿ ನೆಲ್ಯಾಡಿಯ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ರುಕ್ಮಿಣಿ ನಾರಾಯಣ ಭಂಡಾರಿಯವರ ಪುತ್ರಿ ಶ್ರೀಮತಿ ಸುಜಾತ ಭಂಡಾರಿ ಯವರ ಇಪ್ಪತ್ತೇಳನೇ ವರ್ಷದ ಪುಣ್ಯಸ್ಮರಣೆ.
“ಅಮ್ಮ….ನೀವು ನಮ್ಮನ್ನೆಲ್ಲಾ ಅಗಲಿ ಇಂದಿಗೆ ವರ್ಷ ಇಪ್ಪತ್ತೇಳು ಗತಿಸಿದರೂ ಇಂದಿಗೂ ನಿಮ್ಮ ನೆನಪು ನಮಗೆ ಚಿರನೂತನ.ನಿಮ್ಮ ದಿವ್ಯಾತ್ಮದ ಬೆಳಕು ನಮಗೆ ಇಂದಿಗೂ ದಾರಿದೀಪ.ನಮ್ಮನ್ನು ಸದಾ ಕೈ ಹಿಡಿದು ನಡೆಸಿ”…. ಎಂದು ಅವರ ಮಗ ಶ್ರೀ ಶ್ರೀಪಾಲ್ ಭಂಡಾರಿ ನೆಲ್ಯಾಡಿ, ಸೊಸೆ ಶ್ರೀಮತಿ ರಮ್ಯಾ ಶ್ರೀಪಾಲ್ ಭಂಡಾರಿ ಮತ್ತು ಕುಟುಂಬಸ್ಥರು ಅವರ ಚಿರಸ್ಮರಣೆ ಮಾಡುತ್ತಿದ್ದಾರೆ.
ಸುಜಾತ ಭಂಡಾರಿಯವರ ಪುಣ್ಯಸ್ಮರಣೆಯ ಈ ದಿನ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ,ಸಧ್ಗತಿ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ” ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ,

Leave a Reply

Your email address will not be published. Required fields are marked *