September 20, 2024

ಪುತ್ತೂರು  ಪಾಂಗ್ಲಾಯಿಯ 89 ವರ್ಷ ವಯಸ್ಸಿನ ರಾಮಣ್ಣ ಭಂಡಾರಿ ಇವರು ದಿನಾಂಕ 20/04/2018 ಶುಕ್ರವಾರದಂದು ಮಧ್ಯಾಹ್ನ ಮುಕ್ರಂಪಾಡಿ  ಸ್ವಗೃಹದಲ್ಲಿ  ನಿಧನರಾದರು.

ರಾಮಣ್ಣ ಭಂಡಾರಿಯವರು ಕರ್ನಾಟಕ ಸರ್ಕಾರದ ಲೋಕಪಯೋಗಿ ಇಲಾಖೆಯಲ್ಲಿ 36  ವರ್ಷ ಅವಧಿಯಲ್ಲಿ ಉಡುಪಿ  ಪುತ್ತೂರು,  ಸುಳ್ಯ  ಹಾಗೂ ಇನ್ನಿತರ  ಕಡೆಗಳಲ್ಲಿ ತನ್ನ  ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ಮೃತರು ಪುತ್ತೂರು ಲೋಕೋಪಯೋಗಿ ಇಲಾಖೆಯಲ್ಲಿ  ಸೇವೆಯಲ್ಲಿರುವ  ಪ್ರಕಾಶ್ ಭಂಡಾರಿ , ಉದ್ಯಮಿ ಪ್ರವೀಣ್ ಭಂಡಾರಿ ಮತ್ತು ಪ್ರದೀಪ್  ಕುಮಾರ್ ರಾದ ಮೂರು ಮಂದಿ  ಪುತ್ರರು ಹಾಗೂ  ಪ್ರಣಿತ ರಾಮಣ್ಣ ಭಂಡಾರಿ ಕೊಪ್ಪ ಮತ್ತು ಪ್ರತಿಮಾ ಜಗದೀಶ್ ಭಂಡಾರಿ  ಬೆಂಗಳೂರು ಇಬ್ಬರು ಪುತ್ರಿ ಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ 

ಇವರ ನಿಧನಕ್ಕೆ ಭಂಡಾರಿ ಕುಟುಂಬದ  ಮನೆ ಮನದ  ಮಾತು ಭಂಡಾರಿ ವಾರ್ತೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ .

— ಭಂಡಾರಿ ವಾರ್ತೆ

Leave a Reply

Your email address will not be published. Required fields are marked *