September 20, 2024
ಪುತ್ತೂರು  ತಾಲೂಕು ಉರ್ಲಾಂಡಿ ದಿವಂಗತ  ಶ್ರೀ  ನಾರಾಯಣ ಭಂಡಾರಿಯವರ ಧರ್ಮಪತ್ನಿ  ಶ್ರೀಮತಿ  ಗೌರಿ ನಾರಾಯಣ ಭಂಡಾರಿ (87 ವರ್ಷ) ಇವರು ವಯೋಸಹಜ ಅಸೌಖ್ಯದಿಂದ  ಮಾರ್ಚ್ 1, 2020 ನೇ ಆದಿತ್ಯವಾರ ದಂದು  ಸ್ವಗೃಹದಲ್ಲಿ ನಿಧನರಾದರು.  ಅತ್ಯಂತ ಸರಳ ಸಜ್ಜನಿಕೆಯ ಪ್ರಾಮಾಣಿಕ ಜೀವನವನ್ನು   ನಡೆಸುತ್ತಿದ್ದರು ಇವರ ಪುತ್ರಿಯರಾದ  ಶ್ರೀಮತಿ ಮೋಹಿನಿ  ಭಂಡಾರಿ ಪಡೀಲ್ ಮಂಗಳೂರು ,ಶ್ರೀಮತಿ  ವಿಜಯ ಭಂಡಾರಿ  ಉಲಾ೯ಂಡಿ ಪುತ್ತೂರು  ಮತ್ತು  ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಕುಟುಂಬ ವರ್ಗವನ್ನು ಅಗಲಿದ್ದಾರೆ.
 
 
  ಮೃತರ  ಆತ್ಮ ಸದ್ಗತಿಯ ಬಗ್ಗೆ ಉತ್ತರ ಕ್ರಿಯೆಯು ದಿನಾಂಕ 14.3.2020 ನೇ ಶನಿವಾರದಂದು ಮಧ್ಯಾಹ್ನ ಗಂಟೆ  12 : 00 ಸರಿಯಾಗಿ ಶ್ರೀ ಶಾರದಾ ಭಜನಾ ಮಂದಿರ ( ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಪುತ್ತೂರು ) ನಡೆಯಲಿದೆ ಎಂದು ಕುಟುಂಬಸ್ಥರು ಭಂಡಾರಿ ವಾರ್ತೆಗೆ ತಿಳಿಸಿದ್ದಾರೆ.
 
 ಮಕ್ಕಳು  ಮತ್ತು ಕುಟುಂಬಸ್ಥರಿಗೆ ಇವರ ನಿಧನದ  ದುಃಖವನ್ನು  ಸಹಿಸುವ ಶಕ್ತಿಯನ್ನು  ಭಗವಂತನು ಅನುಗ್ರಹಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥಿಸುತ್ತದೆ.
 
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *