September 20, 2024

ಹೊಸನಗರ ತಾಲೂಕು, ರಿಪ್ಪನ್ ಪೇಟೆ ಸಮೀಪದ ಹರತಾಳು ಗ್ರಾಮದ ದಿವಂಗತ ಕುಂದ ಭಂಡಾರಿ ಯವರ ಮಗ ಹರತಾಳು ಶ್ರೀನಿವಾಸ ಭಂಡಾರಿ ಇವರು ಅಲ್ಪ ಕಾಲದ ಅಸೌಖ್ಯದಿಂದ ಮೇ 21 ರಂದು ವಿಧಿವಶರಾದರು.
ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು.


ದಿವಂಗತರು ಎರಡು ಗಂಡು ಮತ್ತು ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ .

ದಿ.ಶ್ರೀನಿವಾಸ ಭಂಡಾರಿ,ಹರತಾಳು.ವೃತ್ತಿ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದೇ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು, ರಿಪ್ಪನ್ ಪೇಟೆ ಭಂಡಾರಿ ಜನಾಂಗದ ಸೊಸೈಟಿ, ರಿ, ಹಾಗೂ ಹೊಸನಗರ ತಾಲೂಕು ಸವಿತಾ ಸಮಾಜದಲ್ಲಿ ಸಕ್ರೀಯರು.

ಅಗಲಿದ ಆತ್ಮಕೆ ಚಿರಶಾಂತಿ ಸಿಗಲಿ , ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *