


ಇಂದಿನ ಅಂತರ್ಜಾಲ, ಮೊಬೈಲ್ ಜಮಾನದಲ್ಲಿ ನಿಜವಾದ ಸ್ನೇಹ, ಪ್ರೀತಿ ಎಲೆ ಮರೆಯ ಕಾಯಿಯಂತಾಗಿದೆ. ಸಂಬಂಧಗಳಲ್ಲಿ ಆತ್ಮೀಯತೆ ದೂರವಾಗಿದೆ. ಟಿ.ವಿ ಪರದೆಯೇ ಎಲ್ಲರ ಬದುಕಿನ ಜೀವಾಳವಾಗಿದೆಯೇ ಹೊರತು ಅತಿಥಿಗಳ ಸತ್ಕಾರ ಮಾಡುವ ಸಮಧಾನ, ಆಚರಣೆ ಕಣ್ಮರೆಯಾಗುತ್ತಿರುವ ಈ ಸಮಾಜದಲ್ಲಿ ಜನರು ಸಂಸ್ಕೃತಿಯತ್ತ ತಲೆ ಎತ್ತಿ ನೋಡುವಂತಾಗಲಿ. ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಕೂಡಿ ಬಾಳುವಂತಹ ಸಮಾಜ ನಮ್ಮದಾಗಲಿ. ಛಲವಾದಿಗಳಾಗಿ ಭಂಡಾರಿ ಸಮಾಜವು ಯಾರಿಗೂ ಕಮ್ಮಿ ಇಲ್ಲದಂತೆ ಸತತವಾಗಿ ಪ್ರಗತಿಯತ್ತ ಸಾಗಲಿ. ಮಕರ ಸಂಕ್ರಮಣವು ಎಲ್ಲರಿಗೂ ಹುಮ್ಮಸ್ಸನ್ನು ನೀಡಲಿ.
ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು.

– ಚಿತ್ರಾ ಮೋಹನ್ ಚಂದ್ರ, ಸೋಮಂತಡ್ಕ