September 20, 2024
ಉಡುಪಿಯ ಬೈಲೂರಿನ ದಿವಂಗತ ರಘು ಬಂಗೇರರವರ ಪತ್ನಿ ಶಕುಂತಲಾ ರಘು ರವರು ಏಪ್ರಿಲ್ 17 ರ ಮಂಗಳವಾರ ಬೆಳಗಿನ ಜಾವ ನಿಧನ ಹೊಂದಿದರು.ಅವರಿಗೆ 60 ವರ್ಷ ವಯಸ್ಸಾಗಿತ್ತು.ಸುರತ್ಕಲ್ ನಿವಾಸಿಯಾಗಿದ್ದ ಶಕುಂತಲಾರವರು ವಯೋಸಹಜ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಕೊನೆಯುಸಿರೆಳೆದಿದ್ದಾರೆ.
ಕದ್ರಿ ಈಶ್ವರ ಭಂಡಾರಿ ಮತ್ತು ಮಾರ್ನಾಡು ಜಾನಕಿ ಭಂಡಾರಿಯವರ ಮಗಳಾದ ಇವರು ತಮ್ಮ ಮಕ್ಕಳಾದ ರಕ್ಷಾ ಕದ್ರಿ,ಚಿರಾಗ್ ಕದ್ರಿ ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
 
ಭಗವಂತನು ಶಕುಂತಲಾರವರ ಅಗಲಿಕೆಯಿಂದ ದುಃಖತಪ್ತ ಕುಟುಂಬಕ್ಕೆ ಸಾಂತ್ವನವನ್ನೂ ಮೃತರ    ಆತ್ಮಕ್ಕೆ ಚಿರಶಾಂತಿಯನ್ನೂ,ಸಧ್ಗತಿಯನ್ನೂ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *