September 20, 2024

ಉಡುಪಿಯ ಅಚ್ಲಾಡಿಯ ಶ್ರೀ ಕೃಷ್ಣ ಭಂಡಾರಿಯವರ ಧರ್ಮಪತ್ನಿ ವರ್ಕಾಡಿ ಮೂಲದ ಶ್ರೀಮತಿ ಸುಶೀಲ ಕೃಷ್ಣ ಭಂಡಾರಿ ಅಚ್ಲಾಡಿ ಅಲ್ಪ ಕಾಲದ ಅಸೌಖ್ಯದಿಂದ ನವೆಂಬರ್ 14 ರ ಭಾನುವಾರ ಸಂಜೆ 6.21 ಕ್ಕೆ ವಿಧಿವಶರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು .

ದಿವಂಗತರು ಪತಿ ಕೃಷ್ಣ ಭಂಡಾರಿ , ಮಗಳು ಕೌಸ್ತುಭ ಅಳಿಯ ಪ್ರದೀಪ್, ಮೊಮ್ಮಗಳು ಕ್ಷೇಮ್ಯ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಶ್ರೀಮತಿ ಸುಶೀಲ ಭಂಡಾರಿಯವರ ಪತಿ ಶ್ರೀ ಕೃಷ್ಣ ಭಂಡಾರಿ ಯವರು ಬೆಂಗಳೂರಿನಲ್ಲಿ ಪೊಲೀಸ್ ಸೇವೆಯಲ್ಲಿದ್ದು ನಿವೃತ್ತರಾಗಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ತಾರೀಕು 15 ರ ಸೋಮವಾರ ಬೆಳಿಗ್ಗೆ11ಕ್ಕೆ ಸ್ವಗೃಹ ಅಚ್ಲಾಡಿಯಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳು ಭಂಡಾರಿ ವಾರ್ತೆಗೆ ತಿಳಿಸಿದೆ

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ , ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಕಚ್ಚೂರು ಶ್ರೀ ನಾಗೇಶ್ವರನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ 

Leave a Reply

Your email address will not be published. Required fields are marked *