September 20, 2024

ಕರ್ನಾಟಕ ರಾಜ್ಯ ಸರಕಾರದ ಪ್ರೌಢ ಶಿಕ್ಷಣ ಮಂಡಳಿಯು ಜುಲೈ ತಿಂಗಳಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯ ಅಂಕದೊಂದಿಗೆ ಉತ್ತೀರ್ಣರಾದ ಶಿವಮೊಗ್ಗ ಜಿಲ್ಲೆಯ ಸೊರಬದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ.

ಶ್ರೇಯಸ್ ಭಂಡಾರಿ ಪಿ. 563 (85.76%) ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಇವರು ಸೊರಬ ಶ್ರೀ ಪ್ರಕಾಶ್ ಭಂಡಾರಿ ಮತ್ತು ಶ್ರೀಮತಿ ಕಾಂತಿ ಭಂಡಾರಿ ದಂಪತಿಯ ಸುಪುತ್ರ.

ಭವಿಷ್ಯದಲ್ಲಿ ವಿಶಿಷ್ಟ ಅಂಕದೊಂದಿಗೆ ಅತ್ಯುನ್ನತ ಪದವಿಯನ್ನು ಪಡೆದು ಮಾದರಿ ಜೀವನ ರೂಪಿಸಿಕೊಳ್ಳಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.

ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *