September 20, 2024
           ಪುತ್ತೂರು ತಾಲ್ಲೂಕು ಪುತ್ಯ, ನೆಲ್ಯಾಡಿಯ ಶ್ರೀ ಶೇಖರ್ ಭಂಡಾರಿ ಮತ್ತು ದಿವಂಗತ ಸುಜಾತ ಶೇಖರ್ ಭಂಡಾರಿಯವರ ಸುಪುತ್ರ ಚಿ||ಶ್ರೀಪಾಲ್ ಭಂಡಾರಿ. ಮತ್ತು ತೊಕ್ಕೊಟ್ಟು ಶ್ರೀ ರವಿ ಭಂಡಾರಿ ಮತ್ತು ಶ್ರೀಮತಿ ಪೂರ್ಣಿಮಾ ರವಿ ಭಂಡಾರಿಯವರ ಸುಪುತ್ರಿ ಚಿ||ಸೌ||ರಮ್ಯ. ಇವರ ವಿವಾಹ ಮಹೋತ್ಸವ ನವಂಬರ್ 26 ನೇ ಭಾನುವಾರ ಅರ್ಕುಲದ ಫರಂಗಿಪೇಟೆಯಲ್ಲಿರುವ  ವೈಭವ್ ಹಾಲ್ ನಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಂಡಾರಿ ಕುಟುಂಬಸ್ಥರು, ಗುರುಹಿರಿಯರು,ಹಿತೈಷಿಗಳು ನವವಧುವರರಿಗೆ ಶುಭ ಹಾರೈಸಿ ಹರಸಿದರು .
     ಭಂಡಾರಿ ಕುಟುಂಬದ ಮದುವೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮದುವೆಯ ನೇರ ಪ್ರಸಾರವನ್ನು “ಭಂಡಾರಿವಾರ್ತೆ” ಆಯೋಜಿಸಿತ್ತು. ಭಂಡಾರಿವಾರ್ತೆ ವೆಬ್ಸೈಟ್ ಮತ್ತು ಫೇಸ್‌ಬುಕ್‌ ಗಳಲ್ಲಿ ಮದುವೆ ಕಾರ್ಯಕ್ರಮದ ನೇರಪ್ರಸಾರವನ್ನು ಜಗತ್ತಿನ ಮೂಲೆಮೂಲೆಗಳಲ್ಲಿರುವ ಭಂಡಾರಿ ಬಂಧುಗಳು, ಆತ್ಮೀಯರು ವೀಕ್ಷಿಸಿ ಸಂತಸಪಟ್ಟರು.
     ನೂತನ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯ ಭಾಗ್ಯ ನೀಡಲಿ, ಅವರ ವೈವಾಹಿಕ ಜೀವನ ಸಂಭ್ರಮದ ಕಡಲಾಗಲಿ ಎಂದು ಭಂಡಾರಿವಾರ್ತೆ ತಂಡವು ಹೃದಯಪೂರ್ವಕವಾಗಿ ಹಾರೈಸುತ್ತದೆ.
“ಭಂಡಾರಿವಾರ್ತೆ ತಂಡ.”

Leave a Reply

Your email address will not be published. Required fields are marked *