September 20, 2024

ಬಂಟ್ವಾಳ ತಾಲೂಕು ಕಸಬಾ ಗ್ರಾಮದ ತುಂಬೆ ಶ್ರೀ ಸುರೇಶ್ ಭಂಡಾರಿ ಮತ್ತು ಶ್ರೀಮತಿ ಜಯಶ್ರೀ  ಸುರೇಶ್ ದಂಪತಿ ತಮ್ಮ ದಾಂಪತ್ಯ ಜೀವನದ 25 ನೇ ಸಂವತ್ಸರಗಳನ್ನು  ದಿನಾಂಕ  15/4/2018 ಆದಿತ್ಯವಾರ ದಂದು ಸಡಗರ  ಸಂಭ್ರಮದಿಂದ ತಮ್ಮ ನಿವಾಸದಲ್ಲಿ  ಆಚರಿಸಿಕೊಂಡರು.

 

ಈ ಶುಭ ಸಂದರ್ಭದಲ್ಲಿ ಮುದ್ದಿನ ಮಕ್ಕಳಾದ ಬೆಂಗಳೂರು ಡಾಟಾ ಎನಾಲಿಸ್ಟ್ ಸಂಸ್ಥೆಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪುತ್ರ ರಂಜನ್ ಭಂಡಾರಿ ಮತ್ತು ಬಂಟ್ವಾಳ ಕೆನರಾ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಅಶ್ವಿತಾ ಭಂಡಾರಿ ಹಾಗೂ  ಕುಟುಂಬಸ್ಥರು,  ಬಂಧು ಮಿತ್ರರು  ಹಾಗೂ ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು .

 

ನಿಮ್ಮ ಮುಂದಿನ ಜೀವನವು ಹಾಲು ಜೇನಿನಂತೆ  ಸುಮಧುರವಾಗಿರಲಿ ಭಗವಂತನು ನಿಮಗೆ ಆಯುರಾರೋಗ್ಯ ಭಾಗ್ಯ   ಸುಖ ಸಂಪತ್ತು  ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ . 

-ಭಂಡಾರಿವಾರ್ತೆ.

1 thought on “ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

  1. ದಾಂಪತ್ಯಜೀವನದ ಬೆಳ್ಳಿಮಹೋಶವ ಸಂಭ್ರಮ ಆಚರಣೆಯ ಸುಭಾಶಯಗಳು ದೇವರು ನಿಮಗೆ ಆರೋಗ್ಯ ಭಾಗ್ಯ ನೆಮ್ಮದಿ ಕರುಣಿಸಲಿ ಜೈ ಶ್ರೀ ರಾಮ್

Leave a Reply

Your email address will not be published. Required fields are marked *