September 20, 2024
ಮುಂಬಯಿ ಲೋವರ್  ಫೆರಲ್ ಶ್ರೀ  ದಿವಂಗತ ನಾರಾಯಣ ಭಂಡಾರಿ ಯವರ  ಧರ್ಮಪತ್ನಿ  ಶ್ರೀಮತಿ ಸುನಂದಾ  ನಾರಾಯಣ ಭಂಡಾರಿ  ( 74 ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ  ಏಪ್ರಿಲ್‌  2  ಗುರುವಾರದಂದು  ಮುಂಜಾನೆ  ಮುಂಬಯಿ ಡೊಂಬಿವಲಿಯ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು.
 
 
ಕೋವಿಡ್-19  ಮಾರಣಾಂತಿಕ ಕಾಯಿಲೆ  ಹಿನ್ನೆಲೆಯಲ್ಲಿ  ದೇಶ ಲಾಕ್ ಡೌನ್  ಆಗಿರುವ  ಕಾರಣ  ಇವರ ಅಂತ್ಯ ಸಂಸ್ಕಾರದ  ವಿಧಿ  ವಿಧಾನಗಳನ್ನು  ಅಪ್ತ ಬಂಧುಗಳ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ಮಕ್ಕಳು  ಭಂಡಾರಿ ವಾರ್ತೆಗೆ ತಿಳಿಸಿದ್ದಾರೆ .
 
 ಪುತ್ರಿಯರಾದ ಶ್ರೀಮತಿ ಜಯಂತಿ ಮೋಹನ್ ಭಂಡಾರಿ , ಶ್ರೀಮತಿ ಹೇಮಲತಾ  ಹರೀಶ್ ಭಂಡಾರಿ, ಪುತ್ರರಾದ ಶ್ರೀ ಸಂಜೀವ ಎನ್. ಭಂಡಾರಿ ಮತ್ತು ಶ್ರೀ ರವಿ ಎನ್.ಭಂಡಾರಿ ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು  ಅಗಲಿದ್ದಾರೆ.  ಶ್ರೀಮತಿ ಸುನಂದಾ  ನಾರಾಯಣ ಭಂಡಾರಿ  ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಮಕ್ಕಳಿಗೆ  ಹಾಗೂ ಕುಟುಂಬಸ್ಥರಿಗೆ ಅಗಲುವಿಕೆಯ ದುಃಖವನ್ನು  ಸಹಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯು ಪ್ರಾರ್ಥಿಸುತ್ತದೆ.
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *