September 20, 2024

ಕೊಟ್ಟಾರ ಶ್ರೀ ಗೋಪಾಲ ಭಂಡಾರಿ (ಪ್ರಕಾಶ್ ಹೇರ್ ಡ್ರೆಸ್ಸರ್ಸ್, ಕೊಡಿಯಾಲ್ ಬೈಲ್, ಮಂಗಳೂರು.) ಯವರ ಧರ್ಮಪತ್ನಿ ಶ್ರೀಮತಿ ವೇದಾವತಿ ಗೋಪಾಲ ಭಂಡಾರಿಯವರು ವಯೋಸಹಜ ಅನಾರೋಗ್ಯದಿಂದ ಮಂಗಳೂರಿನ ಕೊಟ್ಟಾರದ ತಮ್ಮ ನಿವಾಸದಲ್ಲಿ ಜನವರಿ 20 ರ ಶನಿವಾರ ವಿಧಿವಶರಾದರು.  ಅವರಿಗೆ 70 ವರ್ಷ ವಯಸ್ಸಾಗಿತ್ತು. ಕೊಟ್ಟಾರ ಕೊರಗ ಭಂಡಾರಿಯವರ ಮಗಳು, ಕೊಟ್ಟಾರ ಈಶ್ವರ ಭಂಡಾರಿಯವರ ಸಹೋದರಿಯಾದ ಶ್ರೀಮತಿ ವೇದಾವತಿಯವರು ಪತಿ, ಇಬ್ಬರು ಹೆಣ್ಣು ಮಕ್ಕಳಾದ ಲತಾ, ಸ್ಮಿತಾ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಮೃತರ ಮನೆಯವರಿಗೆ,ಸಂಬಂಧಿಕರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

-ಭಂಡಾರಿವಾರ್ತೆ.

1 thought on “ಮಂಗಳೂರು ಶ್ರೀಮತಿ ವೇದಾವತಿ ನಿಧನ

Leave a Reply

Your email address will not be published. Required fields are marked *