September 20, 2024

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಸ್ತಾನದ ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ವೇದಾ ಭಂಡಾರಿ ದಂಪತಿಗಳ ಪುತ್ರ ಅನಿಶ್ ಭಂಡಾರಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  603 (96.48%) ಅಂಕ ಗಳಿಸುವುದರೊಂದಿಗೆ ಅದ್ವಿತೀಯ ಸಾಧನೆಗೈದು ತನ್ನ ಗುರುಗಳಿಗೆ , ಪೋಷಕರಿಗೆ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ‌. ಇವರು ಬೋರ್ಡ್ ಹೈಸ್ಕೂಲ್ ಬ್ರಹ್ಮಾವರ ಇಲ್ಲಿನ ವಿದ್ಯಾರ್ಥಿ.

ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು , ಈ ಸಂದರ್ಭದಲ್ಲಿ ಅನಿಶ್ ಭಂಡಾರಿಯವರ ಸಾಧನೆಯನ್ನು ಅಭಿನಂದಿಸುತ್ತಾ, ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ‘ಭಂಡಾರಿ ವಾರ್ತೆ’ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *