September 20, 2024
ಉಡುಪಿ:  ಬ್ರಾಹ್ಮಿ ಮೋಟರ್ಸ್ ಹಾಗೂ ಬುಲೆಟ್ ಕ್ಲಬ್ ಉಡುಪಿ ಇವರ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 20 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಯನ್ನು ಗುರುತಿಸಿ ಸುಧಾಕರ ಭಂಡಾರಿ ಮುಕ್ಕರವರನ್ನು  ಸನ್ಮಾನಿಸಲಾಯಿತು. 

            ಇವರು ಮೂಲತಃ ಮುಕ್ಕದವರಾಗಿದ್ದು, 1997 ರಲ್ಲಿ ಪೊಲೀಸ್  ಇಲಾಖೆಗೆ ಸೇರಿ ಬ್ರಹ್ಮಾವರ, ಮಣಿಪಾಲ,  ಉಡುಪಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. ಕಳೆದ 1 ವರ್ಷದಿಂದ ಕಾಪು ಪೊಲೀಸ್  ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ವಾರೆಂಟ್ ವಿಭಾಗದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಲವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಇವರು ಶ್ಲಾಘನೆಗೆ ಪಾತ್ರರಾಗಿದ್ದಾರೆ.

ವರದಿ: ಎಸ್.ಕೆ.ಬಂಗಾಡಿ, ಸಂಪಾದಕರು ಭಂಡಾರಿ ವಾರ್ತೆ

 

0 thoughts on “ಸುಧಾಕರ ಭಂಡಾರಿ ಮುಕ್ಕಗೆ ಸನ್ಮಾನ

Leave a Reply

Your email address will not be published. Required fields are marked *