September 20, 2024

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಶ್ರೀ ಸುಂದರ ಭಂಡಾರಿ ಮತ್ತು ಶ್ರೀಮತಿ ವಸಂತಿ ಸುಂದರ ಭಂಡಾರಿ ದಂಪತಿಗಳು ಮಾರ್ಚ್ 24 ರ ಶನಿವಾರ ತಮ್ಮ ಮದುವೆಯ ಮೂವತ್ತನೇ ವರ್ಷಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

 

ಈ ಶುಭ ಸಂದರ್ಭದಲ್ಲಿ ಮಗ ಶ್ರೀ ಚಿಂತನ್ ಭಂಡಾರಿ, ಮಗಳು ಶ್ರೀಮತಿ ಚಿತ್ರ ಮೋಹನ್ ಭಂಡಾರಿ, ಅಳಿಯ ಶ್ರೀ ಮೋಹನ್ ಭಂಡಾರಿ, ಮೊಮ್ಮಗ ಮಾಸ್ಟರ್ ಅಹನ್, ಸೋದರಳಿಯ ಶ್ರೀ ಶ್ರೀಪಾಲ್ ಭಂಡಾರಿ ನೆಲ್ಯಾಡಿ, ಶ್ರೀಮತಿ ರಮ್ಯಾ ಶ್ರೀಪಾಲ್ ಭಂಡಾರಿ ನೆಲ್ಯಾಡಿ ಮತ್ತು ಬಂಧು ಮಿತ್ರರು ಶುಭ ಹಾರೈಸಿದರು.
ತಮ್ಮ ವೈವಾಹಿಕ ಜೀವನದ ಸಂತೃಪ್ತ ಮೂವತ್ತು ವಸಂತಗಳನ್ನು ಪೂರೈಸಿ ಮೂವತ್ತೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯ ನೀಡಿ, ಸುಖ ಶಾಂತಿ ನೆಮ್ಮದಿಯುತ ಜೀವನ ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ, ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *