September 20, 2024

ಸುರತ್ಕಲ್ ಮುಕ್ಕದ  ಶ್ರೀ ಬಾಬು ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್  7,2019 ರ ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. 

ಮೃತರು ಪತ್ನಿ ಶ್ರೀಮತಿ ಗಿರಿಜಾ ಬಾಬು ಭಂಡಾರಿ, ಮಕ್ಕಳಾದ  ಸುಮಿತ್ರಾ, ರವಿ ಭಂಡಾರಿ, ಸುಧಾಕರ್ ಭಂಡಾರಿ,ಅನಿತಾ(ಅಮ್ಮಿ),ಅಳಿಯ,ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೂಲತಃ ಕೃಷಿಕರಾಗಿದ್ದ ಇವರು ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಸುಧಾಕರ್ ಭಂಡಾರಿ ಮುಕ್ಕ ಅವರ ತಂದೆ. 

ಮುಕ್ಕ ಶ್ರೀ ಬಾಬು ಭಂಡಾರಿಯವರ ನಿಧನದಿಂದ ದುಃಖತಪ್ತರಾದ ಅವರ ಕುಟುಂಬಕ್ಕೆ ಆ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀದೇವರಲ್ಲಿ ಪ್ರಾರ್ಥಿಸುತ್ತದೆ. 

“ಭಂಡಾರಿ ವಾರ್ತೆ.”

Leave a Reply

Your email address will not be published. Required fields are marked *