September 20, 2024

ಬಂಟ್ವಾಳ ಭಂಡಾರಿಬೆಟ್ಟು ದಿವಂಗತ ವಿಶ್ವನಾಥ್ ಭಂಡಾರಿ ಮತ್ತು ಶ್ರೀಮತಿ ರಾಧ ಭಂಡಾರಿ ಯವರ ಪುತ್ರ ಸುರೇಂದ್ರ ಭಂಡಾರಿ ಬಂಟ್ವಾಳ (40 ವರ್ಷ ) ತಾರೀಕು 21 ಅಕ್ಟೋಬರ್ ಬುಧವಾರ ದುಷ್ಕರ್ಮಿಗಳ ಸಂಚಿಗೆ ಬಲಿಯಾಗಿದ್ದಾರೆ .

ಸಮಾಜ ಸೇವಕ,ಜನಾನುರಾಗಿ ಹಾಗೂ ಕೊಡುಗೈ ದಾನಿಯಾಗಿದ್ದಸುರೇಂದ್ರ ಭಂಡಾರಿ ಯವರು ತುಳು ಚಲನಚಿತ್ರ ದಲ್ಲಿ ನಟಿಸಿದ್ದರು.

ದಿವಂಗತರು ನಾಲ್ಕು ಸಹೋದರರು ಮತ್ತು ಒಂದು ಸಹೋದರಿಯನ್ನು, ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಅಕ್ಟೋಬರ್ 22 ರ ಮದ್ಯಾಹ್ನ ಬಂಟ್ವಾಳದ ರುದ್ರಭೂಮಿಯಲ್ಲಿ ನೆರವೇರಿತು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ , ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನುಭಗವಂತ ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *