September 20, 2024

ಪುತ್ತೂರು ಖಜಾನೆಮೂಲೆಯ ಶ್ರೀಮತಿ ಸುಲೋಚನಾ ಮತ್ತು ಶ್ರೀ ಧನಂಜಯ ಭಂಡಾರಿ ದಂಪತಿಯ ಪ್ರಥಮ ಪುತ್ರ

ಚಿ । ಸುರೇಶ್


ಮಳಲಿ ದಿವಂಗತ ಮಹಾಬಲ ಭಂಡಾರಿ ಯವರ ಪ್ರಥಮ ಪುತ್ರಿ

ಚಿ । ಸೌ ಯಶ್ಮಿತಾ

ಇವರ ವಿವಾಹವು ಫರಂಗಿಪೇಟೆಯ ಅರ್ಕುಳದಲ್ಲಿರುವ ಯಶಸ್ವಿ ಹಾಲ್ ನಲ್ಲಿ ಏಪ್ರಿಲ್ 24 ರಂದು ಬಂಧು ಮಿತ್ರರ, ಅತಿಥಿ ಗಣ್ಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಆಗಮಿಸಿದ ಅತಿಥಿಗಳು ಅತಿಥಿ ಸತ್ಕಾರ ಸ್ವೀಕರಿಸಿ ಶುಭ ಹಾರೈಸಿದರು .

ಈ ಶುಭ ಸಂದರ್ಭದಲ್ಲಿ ನೂತನ ವಧು ವರರಾದ ಶ್ರೀ ಸುರೇಶ್ ಮತ್ತು ಯಶ್ಮಿತಾ ಸುರೇಶ್ ಭಂಡಾರಿ ನವಜೋಡಿ ಮಧುರವಾದ ಸಂಸಾರ ಸುಖವನ್ನು ಅನುಭವಿಸಲಿ ಮತ್ತು ದೇವರು ಆಯುರಾರೋಗ್ಯ ಸಂಪತ್ತು ನೀಡಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.

Leave a Reply

Your email address will not be published. Required fields are marked *