September 20, 2024

ತುಳು ಮತ್ತು ಕನ್ನಡ ಚಿತ್ರ ರಂಗದ ಖ್ಯಾತ ನಿರ್ದೇಶಕರಾದ ಸುಧಾಕರ್ ಬನ್ನಂಜೆ ನಿರ್ದೇಶನದ ಸ್ನೇಹಕೃಪಾ ಮೂವೀಸ್ ಬ್ಯಾನರ್ ನಲ್ಲಿ ತುಳು ಚಿತ್ರರಂಗದ ದಿಗ್ಗಜರು ನಟಿಸಿರುವ ಬಿಗ್ ಬಜೆಟ್ ನಲ್ಲಿ ತಯಾರಾಗಿರುವ ತುಳುವಿನಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾದ ಫರ್ಸ್ಟ್ ಲುಕ್ ಮತ್ತು ಟೈಟಲ್ ಇದೇ ಬರುವ ಏಪ್ರಿಲ್ 2 ರ ಶನಿವಾರ ಯುಗಾದಿ ಹಬ್ಬದಂದು ನಿಮ್ಮ ಮುಂದೆ ಅನಾವರಣ ಗೊಳ್ಳಲಿದೆ.

ಕಾಲೇಜು ದಿನಗಳಿಂದಲೂ ನಾಟಕ,ಯಕ್ಷಗಾನಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗದ ಸೆಳೆತಕ್ಕೆ ಸಿಲುಕಿ ದಕ್ಷಿಣ ಕನ್ನಡದ ಉಡುಪಿಯಿಂದ ಬೆಂಗಳೂರಿನ ಗಾಂಧಿನಗರಕ್ಕೆ ಬಂದು 1986 ರಲ್ಲಿ ಹೀಗೊಂದು ಪ್ರೇಮಕಥೆ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿ,ಹಲವು ಚಿತ್ರಗಳಲ್ಲಿ ಅಭಿನಯಿಸಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಡ್ತಿ ಹೊಂದಿ ಹಲವಾರು ಯುವ ಪ್ರತಿಭೆಗಳಿಗೆ ಚಿತ್ರರಂಗದಲ್ಲಿ ಅವಕಾಶ ಒದಗಿಸಿಕೊಟ್ಟು ಇಂದಿಗೂ ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಕ್ರಿಯಾಶೀಲವಾಗಿರುವ ಸುಧಾಕರ ಬನ್ನಂಜೆಯವರು‌ ಕನ್ನಡ ಚಿತ್ರರಂಗ ಪ್ರವೇಶಿಸಿದ ಭಂಡಾರಿ ಸಮಾಜದ ಪ್ರಪ್ರಥಮ ನಟ,ನಿರ್ದೇಶಕ ಮತ್ತು ನಿರ್ಮಾಪಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಷ್ಟೇ ಅಲ್ಲದೇ ಹಲವಾರು ಭಂಡಾರಿ ಕುಟುಂಬದ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಕೂಡ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *