September 20, 2024
ಉಡುಪಿ  : ಕಚ್ಚೂರು ಶ್ರೀ  ನಾಗೇಶ್ವರ ದೇವಸ್ಥಾನದ  ಆರಂಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿದು ಆರ್ಥಿಕ ನೆರವನ್ನು ನೀಡಿರುವ ಅಂಬಲಪಾಡಿ ಶ್ರೀ ದಿವಂಗತ ಐತಪ್ಪ ಎಮ್. ಭಂಡಾರಿ ಯವರ ಪತ್ನಿ ಶ್ರೀಮತಿ ಅಪ್ಪಿ ಐತಪ್ಪ  ಭಂಡಾರಿ  ಆದಿತ್ಯವಾರ ಜೂನ್ 28ರಂದು ಮುಂಜಾನೆ ಅಲ್ಪ ಕಾಲದ ಅಸೌಖ್ಯದಿಂದ  ಸ್ವಗೃಹದಲ್ಲಿ ನಿಧನರಾದರು. 
 
 
ಇವರ ನಾಲ್ಕು ಮಂದಿ ಪುತ್ರಿಯರಾದ ಮಂಗಳೂರು ವೆನ್ಲಾಕ್  ಜಿಲ್ಲಾ ಆಸ್ಪತ್ರೆಯ ನಿವೃತ್ತರಾಗಿರುವ  ಹಿರಿಯ  ಫಾರ್ಮಾಸಿಸ್ಟ್  ಶ್ರೀಮತಿ ಸರೋಜ ಸುರೇಶ್ ಭಂಡಾರಿ  ಪಡೀಲ್ ಮಂಗಳೂರು , ಶ್ರೀಮತಿ ಗೀತಾ ಭಾಸ್ಕರ್ ಭಂಡಾರಿ  ಬೆಂಗಳೂರು , ಶ್ರೀಮತಿ ರತ್ನ ಕಿಶೋರ್‍ ಕುಂದರ್ ಪೂನಾ, ಶ್ರೀಮತಿ ಶೋಭಾ  ನಾರಾಯಣ ಭಂಡಾರಿ ಮಂಗಳೂರು ಮತ್ತು ಪುತ್ರ  ಬೆಂಗಳೂರು  ಕರ್ನಾಟಕ ಬ್ಯಾಂಕ್ ನಲ್ಲಿ    ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸದಾನಂದ ಕುಮಾರ್  ಸೊಸೆಯಂದಿರಾದ ಶ್ರೀಮತಿ ರೇಖಾ ಸದಾನಂದ ಕುಮಾರ್ ,  ಶ್ರೀಮತಿ ಜ್ಯೋತಿ ದಯಾನಂದ ಕುಮಾರ್ ಅಂಬಲಪಾಡಿ ಹಾಗೂ ಅಳಿಯದಿಂರು , ಮೊಮ್ಮಕ್ಕಳು , ಮರಿಮಕ್ಕಳನ್ನು ಅಗಲಿದ್ದಾರೆ.
 
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ ಸದ್ಗತಿಯನ್ನು ಪ್ರಾಪ್ತಿಸಿ ಮಕ್ಕಳಿಗೆ ಮತ್ತು ಕುಟುಂಬಸ್ಥರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.
 
 
 
-ಭಂಡಾರಿ ವಾರ್ತೆ
 

Leave a Reply

Your email address will not be published. Required fields are marked *