September 20, 2024
ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಶ್ರೀ ವಸಂತ ಭಂಡಾರಿ ಮತ್ತು ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ ದಂಪತಿಗಳು ತಮ್ಮ ವೈವಾಹಿಕ ಜೀವನದ ಮೂವತ್ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಏಪ್ರಿಲ್ 6 ರ ಶುಕ್ರವಾರ ಕುಟುಂಬಸ್ಥರೊಡಗೂಡಿ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಅವರಿಗೆ ಮಸ್ಕತ್ ನಲ್ಲಿರುವ ಮಗ ಶ್ರೀ ಅನಿಲ್ ಭಂಡಾರಿ,ಸೊಸೆ ಶ್ರೀಮತಿ ಚೇತನ ಅನಿಲ್ ಭಂಡಾರಿ,ಬೆಂಗಳೂರಿನಲ್ಲಿರುವ ಮಗಳು ಶ್ರೀಮತಿ ಅನಿತಾ ಹರೀಶ್ ಭಂಡಾರಿ, ಮೂಡುಬಿದಿರೆಯಲ್ಲಿರುವ ಮಗಳು ಶ್ರೀಮತಿ ಅಮಿತಾ ಗಿರಿಧರ್ ಭಂಡಾರಿ,ಶ್ರೀಮತಿ ಜಯಲಕ್ಷ್ಮಿ ಕೃಷ್ಣ ಭಂಡಾರಿ, ಶ್ರೀಮತಿ ಪ್ರಮೀತಾ ಅಶೋಕ್ ಭಂಡಾರಿ, ಶ್ರೀಮತಿ ಸುಮತಿ ವಿಠ್ಠಲ ಭಂಡಾರಿ, ಶ್ರೀಮತಿ ಶಾಂತ ಜಯ ಭಂಡಾರಿ, ಶ್ರೀಮತಿ ಸರೋಜ ತನ್ಯ ಭಂಡಾರಿ, ಶ್ರೀಮತಿ ಮಾಲತಿ ರಮೇಶ್ ಭಂಡಾರಿ, ಪ್ರೇಮಾ ಭಂಡಾರಿ, ಮೊಮ್ಮಕ್ಕಳಾದ ದೇವಿಕ,ಮನೀಶ್, ಧನ್ವಿತ್,ಅನ್ವಿತ್ ಮತ್ತು ಬಂಧು ಬಳಗದವರು ಶುಭ ಹಾರೈಸಿದ್ದಾರೆ.
ವೈವಾಹಿಕ ಜೀವನದ ಸಂತೃಪ್ತ ಮೂವತ್ನಾಲ್ಕು ವಸಂತಗಳನ್ನು ಪೂರೈಸಿ ಮೂವತ್ತೈದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ಮದುವೆಯ ವಾರ್ಷಿಕೋತ್ಸವ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *