September 20, 2024

ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಉದ್ಯೋಗಿಯಾಗಿರುವ ಶ್ರೀ ದಿನಕರ್ ಭಂಡಾರಿ ಮತ್ತು ಶ್ರೀಮತಿ ಮಮತಾ ದಿನಕರ್ ಭಂಡಾರಿ ದಂಪತಿಗಳು ಕಾರ್ಕಳದಲ್ಲಿ ಮಾರ್ಚ್ 31 ರ ಶನಿವಾರ ತಮ್ಮ ವೈವಾಹಿಕ ಜೀವನದ ದಶಮಾನೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.


ಶಿರಾಳಕೊಪ್ಪದ ದಿವಂಗತ ರಾಜುಭಂಡಾರಿ ಮತ್ತು ಪಾರ್ವತಮ್ಮ ರಾಜು ಭಂಡಾರಿ ದಂಪತಿಗಳ ಮಗನಾದ ಶ್ರೀ ದಿನಕರ್ ಭಂಡಾರಿ ಮತ್ತು ಕಾರ್ಕಳ ತಾಲೂಕಿನ ಹೊಸ್ಮಾರು ಗ್ರಾಮದ ದಿವಂಗತ ಸುಂದರ ಭಂಡಾರಿ ಮತ್ತು ಪುಷ್ಪಾ ಸುಂದರ ಭಂಡಾರಿ ದಂಪತಿಗಳ ಮಗಳಾದ ಶ್ರೀಮತಿ ಮಮತಾ ದಿನಕರ್ ಭಂಡಾರಿ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟು ಹತ್ತು ವರ್ಷಗಳನ್ನು ಪೂರೈಸಿ ಹನ್ನೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಮಕ್ಕಳಾದ ಮಾಸ್ಟರ್ ದಿಗಂತ್,ಬೇಬಿ ದಿಷಿತಾ,ಶಿರಾಳಕೊಪ್ಪ ಹಾಗೂ ಹೊಸ್ಮಾರು ಭಂಡಾರಿ ಕುಟುಂಬಸ್ಥರು,ಬಂಧು ಬಳಗದವರು,ಸ್ನೇಹಿತರು,ಹಿತೈಷಿಗಳು ಶುಭ ಹಾರೈಸಿದ್ದಾರೆ.

ವೈವಾಹಿಕ ಜೀವನದ ದಶಮಾನೋತ್ಸವವನ್ನು ಸಂಭ್ರಮಿಸುತ್ತಿರುವ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯ ಭಾಗ್ಯವನ್ನಿತ್ತು, ಅವರ ಸಕಲ ಇಷ್ಟಾರ್ಥಗಳನ್ನು ಪೂರೈಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತಾ, ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *