September 20, 2024

ಮಂಗಳೂರು ಉಳ್ಳಾಲದಲ್ಲಿ ಶ್ರೀ ತುಕಾರಾಂ ಭಂಡಾರಿ ಮತ್ತು ಶ್ರೀಮತಿ ಹರಿಣಾಕ್ಷಿ ತುಕಾರಾಂ ಭಂಡಾರಿ ದಂಪತಿಯು ಜೂನ್ 12 ರ ಮಂಗಳವಾರ ತಮ್ಮ ವೈವಾಹಿಕ ಜೀವನದ ಇಪ್ಪತ್ತೊಂಬತ್ತನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.


ಈ ಶುಭ ಸಂದರ್ಭದಲ್ಲಿ ಅವರಿಗೆ ಮಕ್ಕಳಾದ ಶ್ರೀ ಪ್ರಜ್ವಲ್ ಭಂಡಾರಿ, ಶ್ರೀ ಪ್ರಣಾಮ್ ಭಂಡಾರಿ, ಹರಿಣಾಕ್ಷಿಯವರ ತಂದೆ ಶ್ರೀ ದಾಮೋಧರ ಭಂಡಾರಿ, ತಾಯಿ ಶ್ರೀಮತಿ ಯಶೋಧ ದಾಮೋಧರ ಭಂಡಾರಿ ಮತ್ತು ಮಂಜೇಶ್ವರ ಹಾಗೂ ಬೆಳ್ತಂಗಡಿ ಗುರುವಾಯನಕೆರೆ ಭಂಡಾರಿ ಕುಟುಂಬಸ್ಥರು ಶುಭ ಹಾರೈಸಿದರು.


ಇಪ್ಪತ್ತೊಂಬತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನಾಚರಿಸಿಕೊಂಡ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು,ಸುಖ ಶಾಂತಿ ನೆಮ್ಮದಿಯುತ ಜೀವನ ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *