September 20, 2024

ಉಜಿರೆಯ ಶ್ರೀ ಸಂಜೀವ್ ಭಂಡಾರಿ ಮತ್ತು ಶ್ರೀಮತಿ ಶಕುಂತಲಾ ಸಂಜೀವ್ ಭಂಡಾರಿ ದಂಪತಿ ತಮ್ಮ ಮೂವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 10 ರ ಮಂಗಳವಾರ ಉಜಿರೆಯ ರಾಮಕೃಷ್ಣ ನಗರದಲ್ಲಿರುವ ತಮ್ಮ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಅವರಿಗೆ ಅವರ ಮಕ್ಕಳಾದ ಸಚಿನ್ ಭಂಡಾರಿ, ನಿತಿನ್ ಭಂಡಾರಿ, ಸಹನಾ ಭಂಡಾರಿ,ಬಂಧು ಬಳಗದವರು, ಹಿತೈಷಿಗಳು ಶುಭ ಹಾರೈಸಿದ್ದಾರೆ.
ತಮ್ಮ ವೈವಾಹಿಕ ಜೀವನದ ಮೂವತ್ತು ವಸಂತಗಳನ್ನು ಪೂರೈಸಿ ಮೂವತ್ತೊಂದನೇ ವರ್ಷಕ್ಕೆ ಹೆಜ್ಜೆಯಿಡುತ್ತಿರುವ ದಂಪತಿಗಳಿಗೆ ಶ್ರೀ ದೇವರು ಅವರಿಗೂ ಹಾಗೂ ಅವರ ಕುಟುಂಬಕ್ಕೂ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು “ಭಂಡಾರಿವಾರ್ತೆ” ಶುಭ ಹಾರೈಸಿ , ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *