September 20, 2024
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಶ್ರೀ ಶ್ರೀಕಾಂತ್ ಭಂಡಾರಿ ಮತ್ತು ಶ್ರೀಮತಿ ಕಾವ್ಯಶ್ರೀ ಶ್ರೀಕಾಂತ್ ಭಂಡಾರಿ ದಂಪತಿಗಳು ಏಪ್ರಿಲ್ 7 ರ ಶನಿವಾರ ತಮ್ಮ ವೈವಾಹಿಕ ಜೀವನದ ಒಂಬತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.  
ಈ ಶುಭ ಸಂದರ್ಭದಲ್ಲಿ ಪುತ್ರಿ  ಬೇಬಿ ತನ್ವಿತ ಹಾಗೂ ಬಂಧುಮಿತ್ರರು ,ಹಿತೈಷಿಗಳು ಶುಭ ಹಾರೈಸಿದ್ದಾರೆ . 
ಶ್ರೀ ಶ್ರೀಕಾಂತ್ ಭಂಡಾರಿ ಯವರು ಪಾಣೆಮಂಗಳೂರಿನಲ್ಲಿ ಖುಷಿ ಮೆನ್ಸ್ ಪಾರ್ಲರ್ ನಡೆಸುತ್ತಿದ್ದು  ಬಂಟ್ವಾಳ ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಶ್ರೀಮತಿ ಕಾವ್ಯಶ್ರೀಯವರು ಮಂಗಳೂರಿನ ಪ್ರತಿಷ್ಠಿತ ಕಾರು ಶೋರೋಮ್ ವೊಂದರಲ್ಲಿ ಕಾರ್ಯ ನಿವ೯ಹಿಸುತ್ತಿದ್ದಾರೆ.

ಇವರ ದಾಂಪತ್ಯ ಜೀವನದ ಒಂಬತ್ತನೇ ವರ್ಷಾಚರಣೆಯ ಈ ಶುಭ ಸಂದರ್ಭದಲ್ಲಿ ಭಗವಂತನು ಶ್ರೀ ಶ್ರೀಕಾಂತ್ ಭಂಡಾರಿ ಮತ್ತು  ಶ್ರೀಮತಿ ಕಾವ್ಯಶ್ರೀ ಶ್ರೀಕಾಂತ್ ಭಂಡಾರಿ  ದಂಪತಿಯವರಿಗೆ ಆಯುರಾರೋಗ್ಯ ಸುಖ ಸಂಪತ್ತು ನೀಡಿ ನೆಮ್ಮದಿಯ ಜೀವನ ನಡೆಸುವ ಶಕ್ತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ

1 thought on “ವೈವಾಹಿಕ ಜೀವನದ ಒಂಬತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಣೆಮಂಗಳೂರಿನ ಶ್ರೀಕಾಂತ್ ಭಂಡಾರಿ ದಂಪತಿಗಳು

Leave a Reply

Your email address will not be published. Required fields are marked *