September 20, 2024

ಮಂಗಳೂರು ತಾಲ್ಲೂಕು ಕುಪ್ಪೆಪದವು ದಿವಂಗತ ಬಾಬು ಯಾನೆ ಕೃಷ್ಣಯ್ಯ ಮತ್ತು ಉಡುಪಿ ತಾಲ್ಲೂಕು ಪರ್ಕಳ ದಿವಂಗತ ಶಂಕರ ಭಂಡಾರಿಯವರ ಪೌತ್ರ ಹಾಗೂ ಕುಪ್ಪೆಪದವು ಶ್ರೀ ಸತೀಶ್ ಕೆ. ಭಂಡಾರಿ ಮತ್ತು ಶ್ರೀಮತಿ ಆಶಾಲತಾ ದಂಪತಿಯ ಪುತ್ರ

ಚಿ॥ ಅಖಿಲೇಶ್

ಪಾಂಗಾಳ ದಿವಂಗತ ಗೋಪಾಲ ಭಂಡಾರಿ ಮತ್ತು ಬಿರ್ತಿ ದಿವಂಗತ ಶಂಭು ಭಂಡಾರಿಯವರ ಪೌತ್ರಿ ಮತ್ತು ಪಾಂಗಾಳ
ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಶೋಭಾ ರಮೇಶ್ ಬ್ರಹ್ಮಾವರ ದಂಪತಿಯ ಪುತ್ರಿ ಹಾಗೂ ಬ್ರಹ್ಮಾವರ
ಡಾ॥ ಶಶಿಧರ್ ರವರ ಸೊಸೆ

ಚಿ ॥ಸೌ ॥ಸೌಮ್ಯಶ್ರೀ

ಉಡುಪಿಯ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಅಡಿಟೋರಿಯಂ ನಲ್ಲಿ ನವದಂಪತಿಗಳು ತಮ್ಮ ದಾಂಪತ್ಯ ಜೀವನದ ಸಪ್ತಪದಿಯನ್ನು ತುಳಿದು ಗುರುಹಿರಿಯರು , ಬಂಧುಮಿತ್ರರು , ಕುಟುಂಬಸ್ಥರ , ಹಿತೈಷಿಗಳ ಹಾಗೂ ಗಣ್ಯರ ಶುಭ ಆಶೀರ್ವಾದದೊಂದಿಗೆ ವಿಜ್ರಂಭಣೆಯಿಂದ ಶುಭ ವಿವಾಹ ನವೆಂಬರ್ 21 ನೇ ರವಿವಾರದಂದು ನಡೆಯಿತು.

ನವ ಜೋಡಿಗಳ ಸಾಂಸಾರಿಕ ಜೀವನವು ಸುಖ ಶಾಂತಿ ಹೊಂದಾಣಿಕೆ ಅನ್ಯೋನ್ಯತೆಯೊಂದಿಗೆ ನೆಮ್ಮದಿಯ ಬದುಕನ್ನು ನೂರಾರು ಕಾಲ ಮುನ್ನಡೆಸಲು ಕಚ್ಚೂರು ಶ್ರೀ ನಾಗೇಶ್ವರ ದೇವರ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *