September 20, 2024
Advt.

advt.
ಸುಳ್ಯ ತಾಲೂಕು ಪಂಜ ಶ್ರೀಮತಿ ಚಂದ್ರಕಲಾ ಮತ್ತು ಶ್ರೀ ನಾರಾಯಣ ಭಂಡಾರಿ ದಂಪತಿಯ ಪುತ್ರ ಚಿ॥ ಪ್ರವೀಣ ಕುಮಾರ ಹಾಗೂ
ಕಾರ್ಕಳ ತಾಲೂಕು ನಲ್ಲೂರು ಶ್ರೀಮತಿ  ಸೇಸಮ್ಮ ಸೂಡ ದಿ ॥ ಕರುಣಾಕರ ಭಂಡಾರಿ ದಂಪತಿಯ ಪುತ್ರಿ  ಚಿ॥ ಸೌ॥ ವಿನಯ ರವರ ವಿವಾಹವು ಜೂನ್ 21 ರ ಗುರುವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಸನ್ನಿಧಿ ಯಲ್ಲಿ ಶ್ರೀ ದೇವಿಯ ಮತ್ತು ಕುಟುಂಬಸ್ಥರ ಆಶೀರ್ವಾದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇವರ ಮದುವೆಯ ಔತಣ ಕೂಟವು ಅಂದು ಮಧ್ಯಾಹ್ನಸುಳ್ಯ ತಾಲೂಕು ಪಂಜ ಪೈಂದೋಡಿ ಸುಬ್ರಾಯ ಸ್ವಾಮಿ ಸಭಾಭವನ ದಲ್ಲಿ ಬಂದು ಮಿತ್ರರು ಗುರು ಹಿರಿಯರು ಕುಟುಂಬಸ್ಥರ ಶುಭ ಆಶೀರ್ವಾದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಶ್ರೀ ದೇವಿಯ ದಿವ್ಯ ಸಾನ್ನಿಧ್ಯದಲ್ಲಿ ವಿವಾಹ ಬಂಧನಕ್ಕೊಳಗಾದ ನವ ಜೋಡಿಗಳಿಗೆ ಭಗವಂತನು ಅವರ ಸಕಲ ಇಷ್ಠಾರ್ಥಗಳನ್ನೂ ನೆರವೇರಿಸಿ,ಸುಖ ಶಾಂತಿ ನೆಮ್ಮದಿಯುತ ಬಾಳು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *