September 20, 2024
ಉಡುಪಿ ತಾಲೂಕು ಕಡಂಗೋಡು ದಿವಂಗತ ಭಾಸ್ಕರ್ ಭಂಡಾರಿ ಮತ್ತು ಪ್ರಫುಲ್ಲ ಭಾಸ್ಕರ ಭಂಡಾರಿ ದಂಪತಿಯ ಪುತ್ರ  
ಚಿ॥ಸುದೀರ್ ಕುಮಾರ್ 
ಮತ್ತು ಬಂಟ್ವಾಳ ತಾಲೂಕಿನ ಇವ೯ತ್ತೂರು ನೇರಳಕಟ್ಟೆ ಶ್ರೀ ಭಾಸ್ಕರ್ ಭಂಡಾರಿ ಮತ್ತು ಶ್ರೀಮತಿ ಸುಶೀಲಾ ಭಾಸ್ಕರ್ ಭಂಡಾರಿ ದಂಪತಿಯ ಪುತ್ರಿ
ಚಿ॥ಸೌ॥ ಸುಚಿತ್ರ 
ಇವರ ವಿವಾಹವು ಏಪ್ರಿಲ್ 9 ರ ಸೋಮವಾರ ಬಂಟ್ವಾಳದ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
 
 ಸುಧೀರ್ ಕುಮಾರ್ ರವರು ಮಂಗಳೂರಿನ ಹರ್ಷ ಸಂಸ್ಥೆಯ ಉದ್ಯೋಗಿಯಾಗಿದ್ದು,ಸುಚಿತ್ರಾರವರು ಉಡುಪಿ ತಾಲೂಕು ಭೂಮಾಪನ ಇಲಾಖೆಯಲ್ಲಿ  ಕಾರ್ಯ ನಿರ್ವಹಿಸುತ್ತಿದ್ದಾರೆ.
 
ಈ ಶುಭ ಸಮಾರಂಭಕ್ಕೆ ಸಮಾಜ ಬಾಂಧವರು ಗುರು ಹಿರಿಯರು ಹಿತೈಷಿಗಳು ಹಾಗೂ ಸಹೋದ್ಯೋಗಿಗಳು ಆಗಮಿಸಿ ಶುಭ ಹಾರೈಸಿದರು. 
ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವಜೋಡಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯವನ್ನು ಕರುಣಿಸಲಿ ಮತ್ತು ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ”ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *