September 20, 2024

White Sugar: ಒಂದು ವಾರ ಪೂರ್ತಿ ಸಕ್ಕರೆ ತಿನ್ನೋದನ್ನು ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ?

ಒಂದು ವಾರ ಪೂರ್ತಿ ಬಿಳಿ ಸಕ್ಕರೆಯನ್ನು ಸೇವಿಸುವುದನ್ನು ಬಿಟ್ಟರೆ ನಿಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎನ್ನುವುದನ್ನು ತಿಳಿಯೋಣ.

ಸಕ್ಕರೆ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ನಮಗೆ ತಿಳಿದೇ ಇದೆ. ಸಂಸ್ಕರಿಸಿದ ಬಿಳಿ ಸಕ್ಕರೆಯು ನಮ್ಮ ದೇಹಕ್ಕೆ ಅತ್ಯಂತ ಹಾನಿಕಾರಕ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ನಾವು ಜ್ಯೂಸ್, ಟೀ, ಕಾಫಿ, ಐಸ್ ಕ್ರೀಮ್ಗಳು, ಬಿಸ್ಕತ್ತುಗಳು, ಚಾಕೊಲೇಟ್ಗಳು ಇನ್ನಿತರ ರೂಪದಲ್ಲಿ ಸಕ್ಕರೆಯನ್ನು ಸೇವಿಸುತ್ತೇವೆ.

ಸಕ್ಕರೆಯು ಖಾಲಿ ಕ್ಯಾಲೋರಿಗಳಿಂದ ತುಂಬಿರುತ್ತದೆ ಇದು ಮೊಡವೆಗಳು, ತಡವಾದ ಜೀರ್ಣಕ್ರಿಯೆ, ರಕ್ತದ ಸಕ್ಕರೆ, ಉರಿಯೂತ ಮತ್ತು ರಕ್ತದೊತ್ತಡವನ್ನು ಉಂಟುಮಾಡುತ್ತದೆ. ಆದರೆ ನಿಮ್ಮ ಆಹಾರದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದಾಗ ಏನಾಗುತ್ತದೆ ಎನ್ನುವುದು ಗೊತ್ತೇ?

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ನಾವು ಸೇವಿಸುವ ಸಕ್ಕರೆ ಭರಿತ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಇದು ಮಧುಮೇಹ ಹೊಂದಿರುವ ಜನರಿಗೆ ವಿಶೇಷವಾಗಿ ಹಾನಿಕಾರಕವಾಗಿದೆ.

ಆಹಾರದಿಂದ ಸಕ್ಕರೆಯನ್ನು ಕಡಿತಗೊಳಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣವನ್ನು ಸುಧಾರಿಸಬಹುದು. ನಿಮಗೆ ಸಿಹಿ ಇಲ್ಲದೆ ಜ್ಯೂಸ್, ಟೀ , ಕಾಫಿ ಕುಡಿಯಲು ಸಾಧ್ಯವಾಗದಿದ್ದಲ್ಲಿ ಸಕ್ಕರೆಯ ಬದಲಿಗೆ ಆರೋಗ್ಯಕರ ಸಿಹಿಕಾರಕಗಳನ್ನು ಸೇರಿಸಬಹುದು.

ತೂಕ ನಷ್ಟ

ನೀವು ತೂಕವನ್ನು ಕಳೆದುಕೊಳ್ಳುವ ಗುರಿಯನ್ನು ಹೊಂದಿದ್ದರೆ, ನೀವು ಮೊದಲು ನಿಮ್ಮ ಆಹಾರದಿಂದ ಸಕ್ಕರೆಯನ್ನು ಕಡಿತಗೊಳಿಸುವುದು. ಸಕ್ಕರೆಭರಿತ ಯಾವುದೇ ಆಹಾರದ ಸೇವನೆಯನ್ನು ನಿಲ್ಲಿಸಬೇಕು. ಸಕ್ಕರೆ ಖಾಲಿ ಕ್ಯಾಲೊರಿಗಳನ್ನು ಹೊಂದಿದ್ದು ಹಠಾತ್ ತೂಕವನ್ನು ಉಂಟುಮಾಡುತ್ತದೆ.

ಬಿಳಿ ಸಕ್ಕರೆಯಷ್ಟೇ ಅಲ್ಲ, ತಂಪು ಪಾನೀಯಗಳು, ಚಾಕೊಲೇಟ್ಗಳು, ಕೇಕ್ಗಳು, ಕುಕೀಗಳು, ಐಸ್ಕ್ರೀಮ್ಗಳು ಮತ್ತು ಸಕ್ಕರೆಯನ್ನು ಹೊಂದಿರುವ ಪ್ಯಾಕೇಜ್ ಮಾಡಿದ ಆಹಾರಗಳಿಂದಲೂ ನೀವು ದೂರವಿರಬೇಕು.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ದುರ್ಬಲ ಕರುಳನ್ನು ಹೊಂದಿರುವ ಜನರು ಸಕ್ಕರೆಗಳನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಮತ್ತು ಅತಿಸಾರದಂತಹ ಜೀರ್ಣಕಾರಿ ತೊಂದರೆಗಳಿಗೆ ಕಾರಣವಾಗಬಹುದು.

ಜೀರ್ಣಕ್ರಿಯೆಯನ್ನು ಸುಲಭವಾಗಿಸಲು ಒಂದು ವಾರದವರೆಗೆ ಸಕ್ಕರೆಯನ್ನು ತ್ಯಜಿಸಲು ಪ್ರಯತ್ನಿಸಿ. ಇದರಿಂದ ಬದಲಾವಣೆಯನ್ನು ನೀವೇ ಕಂಡುಕೊಳ್ಳುವಿರಿ.

ಉತ್ತಮ ನಿದ್ರೆ

ಆಹಾರದಿಂದ ಸಕ್ಕರೆಯನ್ನು ತೆಗೆದುಹಾಕುವುದರ ಇನ್ನೊಂದು ಪ್ರಯೋಜನವೆಂದರೆ ಉತ್ತಮ ನಿದ್ರೆ. ನೀವು ತಂಪು ಪಾನೀಯಗಳು, ಚಹಾ ಅಥವಾ ಕಾಫಿಯಂತಹ ಸಕ್ಕರೆ ಪಾನೀಯಗಳನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದರೆ, ವಿಶೇಷವಾಗಿ ಮಲಗುವ ಸಮಯದಲ್ಲಿ ಇದು ನಿಮ್ಮ ನಿದ್ರೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ಸಕ್ಕರೆಯನ್ನು ತ್ಯಜಿಸುವುದರಿಂದ ಅನಿಯಮಿತ ನಿದ್ರೆಯ ಮಾದರಿಗಳನ್ನು ಸುಧಾರಿಸಬಹುದು.

ಉರಿಯೂತ ನಿವಾರಣೆ

ಆಂತರಿಕ ಉರಿಯೂತವು ಆಯಾಸ, ಸ್ನಾಯು ನೋವನ್ನು ಉಂಟುಮಾಡಬಹುದು. ಅಲ್ಲದೆ ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಬಹುದು. ಸಂಸ್ಕರಿಸಿದ ಸಕ್ಕರೆಯ ಸೇವನೆಯು ದೇಹದಲ್ಲಿ ಉರಿಯೂತದ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇದು ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಕ್ಕರೆಯನ್ನು ತ್ಯಜಿಸಿದ ಒಂದು ವಾರದೊಳಗೆ ಒಳಗಿನ ಉರಿಯೂತವನ್ನು ಕಡಿಮೆ ಮಾಡಲು ಪ್ರಾರಂಭಿಸುತ್ತದೆ.

ಹೆಚ್ಚಿದ ಶಕ್ತಿಯ ಮಟ್ಟಗಳು

ಕಳೆದ ಕೆಲವು ದಿನಗಳಿಂದ ನೀವು ಹೆಚ್ಚು ಆಯಾಸ ಮತ್ತು ಆಲಸ್ಯವನ್ನು ಅನುಭವಿಸುತ್ತಿದ್ದರೆ, ನಿಮ್ಮ ಸಕ್ಕರೆ ಮಟ್ಟವನ್ನು ನೀವು ಪರಿಶೀಲಿಸಬೇಕು. ಸಕ್ಕರೆಯ ಸೇವನೆಯು ಎರಡು ಪಟ್ಟು ವೇಗದಲ್ಲಿ ನಿಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಆದ್ದರಿಂದ ಸಕ್ಕರೆಯ ಬದಲಿಗೆ ಆರೋಗ್ಯಕರ ಸಿಹಿಕಾರಕಗಳನ್ನು ತೆಗೆದುಕೊಳ್ಳುವುದರಿಂದ ಶಕ್ತಿಯ ಮಟ್ಟವನ್ನು ಸ್ಥಿರಗೊಳಿಸುತ್ತದೆ ಮತ್ತು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: vk

 

Leave a Reply

Your email address will not be published. Required fields are marked *